checking data baseConnected successfully! Sample Image
  •  

ಜಕ್ಕಣ್ಣನ 'ಏಕೋತ್ತರಶತಸ್ಥಲ' ವಚನಗಳು

search:
ಕಲ್ಲೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವ್ಯಕ್ತದಂತೆ, ಶಬ್ದದೊಳಗಣ ನಿಃಶಬ್ದದಂತೆ, ನೋಡಾ ಗೊಗೇಶ್ವರಾ, ನಿಮ್ಮ ಶರಣ ಸಂಬಂಧ. 1.02 1 ಅಲ್ಲಮ ಗುಹೇಶ್ವರಾ
ಇತರ ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 1
ಹಲಗೆಯಾರ್ಯನ ಶೂನ್ಯಸಂಪಾದನೆ 1
ಉದಕದೊಳಗೆ ಬೈಚಿಟ್ಟ |ಬಯ್ಕೆ✻ಬಯಕೆ✻|ಯ ಕಿಚ್ಚಿನಂತಿದ್ದಿತ್ತು. |ಸಸಿ||ಶಶಿ| ಯೊಳಗಣ
ಫಲದ ರುಚೆಯಂತಿದ್ದಿತ್ತು. ನನೆಯೊಳಗಣ ಪರಿಮಳದಂತಿದ್ದಿತ್ತು. ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು.
1.01 2 ಬಸವಣ್ಣ ಕೂಡಲಸಂಗಮದೇವ
ಇತರ ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 71.03
ಫಲದೊಳಗಣ ಮಧುರ ಗೋಪ್ಯದಂತ್ತಿದ್ದಿತ್ತು. ಚಂದ್ರಕಾಂತದ ಉದಕದ ಪರಿಯಂತಡಿದ್ದಿತ್ತು. ಮಯೂರನ ತತ್ತಿಯ ಚಿತ್ರದಂತಿದ್ದಿತ್ತು. ಶಿಶು ಕಂಡ ಕನಸಿನ ತೆಱದಂತಿದ್ದಿತ್ತು. ಇದು ಕಾರಣ. ಕೂಡಲಚೆನ್ನಸಂಗಯ್ಯಾ, ಸದ್ಗುರುವಿನ ಚಿತ್ತದ ಪದದಂತಿದ್ದಿತ್ತು. 1.03 3 ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಮರೀ[ಚಿ]ಯೊಳಡಗಿದ ಬಿಸಿಲಿನಂತಿದ್ದಿತ್ತು. ಕ್ಷೀರದೊಳಗಡಗಿದ ತುಪ್ಪದಂತಿದ್ದಿತ್ತು. ಚಿತ್ರಕನೊಳಡಗಿದ ಚಿತ್ರದಂತಿದ್ದಿತ್ತು ಆಲಿಯೊಳಡಗಿದ ತೇಜದ ಗೋಪ್ಯದಂತಿದ್ದಿತ್ತು ನುಡಿಯೊಳಡಗಿದ ಅರ್ಥದಂತಿದ್ದಿತ್ತು. ಕೂಡಲಸಂಗಯ್ಯಾ, ನಿಮ್ಮ ನಿಲವು. 1458.03 4 ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಇತರ ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 72.04
ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ? ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ? ತೋಱಲಿಲ್ಲಾರಿಗೆಯೂ. ಗುಹೇಶ್ವರ ನಿಂದ ನಿಲವ ಅನುಭವಸುಖಿ ಬಲ್ಲ. 2.02 5 ಅಲ್ಲಮ ಗುಹೇಶ್ವರ
ಇತರ ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 2
ಹಲಗೆಯಾರ್ಯನ ಶೂನ್ಯಸಂಪಾದನೆ 2
ಅಂಕುರ ಪಲ್ಲವ ತರು ಕುಸುಮ ಪರಿಮಳ ಫಲರಸ ಸಾರಾಯ ಇನಿತಿನಿತೆಲ್ಲಿದ್ದುರೊ-ಬೀಜ ಮೊಳೆಯಾಗದಂದು? ನಾಭಿ ಕಳೆಯದ ಪಶುವಿನ ಅಮೃತವೆಲ್ಲಿದ್ದುದೊ-ವೃಷಭ ಮುಟ್ಟದಂದು? ಘನಕುಚ ಯೌವನೆಯರ ಅವಸ್ಥಾಂತರದಲುದಿಸಿದ ಶಿಶುವೆಲ್ಲಿದ್ದುದೊ-ಕೊಡಗೂಸು ಕನ್ನೆಯಳಿಯದಂದು? ಶರಧಿಯ ಸಿಂಪಿನ ರತ್ನವೆಲ್ಲಿದ್ದುದೊ-ಸ್ವಾತಿಯ ಸಲಿಲವಿಲ್ಲದಂದು? ಸಪ್ತಸ್ವರ ಅಕ್ಷರ ವಸ್ತುಕ ವರ್ಣಕವೆಲ್ಲಿದ್ದುದೊ-ಜ್ಞಾನ ಉದಯಿಸದಂದು? ತ್ರಿಜಗದುತ್ಪತ್ತಿ ಸ್ಥಿತಿಕಾರಣ ಸಚರಾಚರಗಂಭೀರವೆಲ್ಲಿದ್ದುದೊ-ಶಿವನ ಅಷ್ಟತನುಮೂರ್ತಿ ಗಳಿಲ್ಲದಂದು? ಶರಣಪಥ ಲಿಂಗೈಕ್ಯವೆಲ್ಲಿದ್ದುದೊ-ಆರಾಧ್ಯಲಿ೦ಗ ಸಕಳೇಶ್ವರ ಮಹಾಘನಲಿಂಗವಿದ್ದಾನೆಂದು ಸದ್ಗುರುಸ್ವಾಮಿ ಕೃಪೆಮಾಡಿ ತೋಅದಂದು? 369.09 6 ಸಕಳೇಶಮಾದರಸ ಸಕಳೇಶದೇವರು
ಅ೦ಡಜ ಪೃಥ್ವಿ ರಚಿಸದಂದು, ಭೂಮಂಡಲವಾಗದಂದು, ಪಿಂಡದ ಬೀಜವ ನವಬ್ರಹ್ಮರು ತಾರದಂದು, ನವಖಂಡವು ರಚಿಸದಂದು, ಪೃಥ್ವಿಯಪ್ಪು ತೇಜ ವಾಯುವಾಕಾಶ ಸ್ಥಲವಿಡಿಯದಂದು. ಅನುಕರಿಸದಂದು, ರೂಹಿಸದಂದು, ಎನಗೆ ತನಗೆಂಬ ಚೈತನ್ಯ ತಲೆದೋಜದ೦ದು, ಖಷಿಗಳಾಶ್ರಯ ಲೋಕಕ್ಕೆ ಹರಿಯದಂದು, ಅಂದು ಬಸವನಿದ್ದ ಕಾಣಾ! ರೇಕಣ್ಣಪ್ರಿಯನಾಗಿನಾಥ 126.08 7 ಬಹುರೂಪಿಚೌಡಯ್ಯ ರೇಕಣ್ಣಪ್ರಿಯ ನಾಗಿನಾಥಾ.
ಸರ್ಪನ ಮೇಲೆ ಪೃಥ್ವಿ ರಚಿಸದಂದು, ಸಮುದ್ರಂಗಳೇಳೂ ಹಾಸದಂದು, ಅಷ್ಟದಿಗುದಂತಿಗಳು ಹುಟ್ಟದಂದು, ಶಂಕು ಶಲಾಕೆಯಿಲ್ಲದಂದು, ಗಂಗೆ ಗೌರೀವಲ್ಲಭರಿಲ್ಲದಂದು, ಬ್ರಹ್ಮ ವಿಷ್ಟು ರುದ್ರ ಈಶ್ವರ ಸದಾಶಿವ-ಈ ಐವರು ಹುಟ್ಟದಂದು, ಇವರೈವರ ತಾಯಿತಂದೆ ಇಲ್ಲದಂದು, ನಿಜಗುರು ಸ್ವತಂತ್ರ ಕಪಿಲಸಿದ್ಧಮಲ್ಲೇಶ್ವರಾ, ನಿಮ್ಮ ಹೆಸರೇನಯ್ಯ 1076.04 8 ಸಿದ್ಧರಾಮ ಕಪಿಲಸಿದ್ಧಮಲ್ಲೇಶ್ವರಾ
ಇತರ ಆಕರ ಗ್ರಂಥಗಳು
ಲಿಂಗಲೀಲಾವಿಲಾಸ ಚಾರಿತ್ರ 10.10
ಹಲಗೆಯಾರ್ಯನ ಶೂನ್ಯಸಂಪಾದನೆ 245
ಕಾಳಾಂಧರ ಧರೆ ವಾರುಧಿ ಸಹಿತ ಏನೂ ಏನೂ ಇಲ್ಲದಂದು ಪ್ರಮಥನೊಬ್ಬನಿದ್ದ ನೊಂದನಂತಕಾಲ, ನಿರವಯ ನಿರ್ಮಾಯನಾಗಿದ್ದನೊಂದು ಕೋಟ್ಯಾನುಕೋಟಿ ವರುಷ. ಅಲ್ಲಿ ಅನಾಗತವುಂಟು. ಮನವು ಮಹದಲ್ಲಿ ನಿಂದು ಉತ್ಪತ್ಯವೆ೦ದರೆ, ಬಯಲು ಬೆಸಲಾಯಿತ್ತು. ನರರು ಸುರರು ಮೊದಲಾದ ಚೌರಾಸಿ ಜೀವಂಗಳು ಉದಿಸಿದವಯ್ಯಾ-ಇಂತಿವೆಲ್ಲವೂ, ಕೂಡಲಚೆನ್ನಸಂಗಾ, ನಮ್ಮ ಬಸವಣ್ಣ ನೆನೆದಡೆ. 4.03 9 ಚೆನ್ನಬಸವಣ್ಣ ಕೂಡಲಚೆನ್ನಸಂಗಯ್ಯಾ
ಅಯ್ಯಾ, ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ, ಆಕಾಶ ಪ್ರಕಾಶವಿಲ್ಲದಂದು, ಸಾಕ್ಷಿ ಸಭೆಗಳಿಲ್ಲದಂದು, ಆಧಾರದೊಳಗಣ ವಿಭೂತಿಯನೆ ತೆಗೆದು ಭೂಮಿಯ ನೆಲೆಗೊಳಿಸಿ, ಪಂಚಾಶತಕೋಟವಿಸ್ತೀರ್ಣ ಭೂಮಂಡಲಕ್ಕೆ ಸುತ್ತಿ ಹರಿದವು ಸಪ್ತಸಾಗರಂಗಳು. ಎ೦ಬತ್ತಾಱುಕೋಟಿಯು೦ ತೊಂಬತ್ತೇಳುಲಕ್ಷ ಕಾಲ ಭುವನಮಂಡಲಕ್ಕೆ ಉದಯಬ್ರಹ್ಮಾಂಡವಱುವತ್ತಾಱು ಕೋಟಿ ತಾರಾಮಂಡಲವೆಂದರೆ, ಬೆಳಗಿ ತೋಱಿದ ಹನ್ನೆರಡು ಜ್ಯೋತಿಯ; ನಿಲಿಸಿ ತೋಱಿದ ಹದಿನಾಲ್ಕು ಭುವನವ; ಈ ಜಗದ ಜಂಗುಳಿಯ ಕಾವ ಗೋವಳ ತಾನಾಗಿ, ಚೌರಾಸಿ ಲಕ್ಷ ಜೀವರಾಸಿಗಳಿಗೆ ರಾಸಿವಾಳ ತಾನಾಗಿ. ಸಕಲದ ಅಳಿವಿನ ಉಳಿವಿನಿ೦ದ ನಿಲವ ನೋಡಿ ಕಂಡೆ, ಗೊಗೇಶ್ವರಾ, ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. 8.02 10 ಅಲ್ಲಮ ಗುಹೇಶ್ವರಾ