checking data baseConnected successfully! Sample Image
  •  

MY REF NO: 2031611.02

ಮೇಲಿನ ವಚನ ಕಾಣಿಸಿಕೊಳ್ಳುವ ಆಕರಗಳು
ವಚನ ಸಂಖ್ಯೆ: 1611 (ಸಮಗ್ರ ವಚನ ಸಂಪುಟ 2)
ಹವಣಲ್ಲದ ಶಾಖೆಯ ಕಪಿ ಹಿಡಿಯಲೊಲ್ಲದು.
ಗಮನವಿಲ್ಲದ ಪಿಕಶಿಶು ನುಡಿಯಲರಿಯದು.
ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕಟ.
ಇಂತೀ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪಡೆ !
ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ?
ಹಸಿವು ತೃಷೆ ವಿಷಯ ಉಳ್ಳನ್ನಕ್ಕ ಅದ್ವೈತ ಉಂಟೆ ಜಗದೊಳಗೆ?
ತನ್ನ ಮರೆದು ಲಿಂಗವ ಮರೆವುದು,
ತನ್ನ ಮರೆಯದೆ ಲಿಂಗವ ಮರೆವ ಯೋಗವಿನ್ನೆಂತಾದುದೊ?
ಸುಡು, ಸುಡು, ಅವಂದಿರು ಗುರುದ್ರೋಹಿಗಳು ಆಚಾರಭ್ರಷ್ಟರು.
ಈ ಉಭಯ ತನುಗುಣ ನಾಸ್ತಿಯಾಗದನ್ನಕ್ಕ;
ಸತ್ಕ್ರಿಯೆಯಿಂದ ಮಾಡುವುದು ಲಿಂಗದಾಸೋಹವ.
ಭಯಭಕ್ತಿಯಿಂದ ಮಾಡುವುದು ಜಂಗಮದಾಸೋಹವ.
ತನು ಕರಗದೆ ಮನ ಬೆರಸದೆ ನಿಮಗೆ ಮಾಡುವ ವ್ರತಗೇಡಿಗಳ
ಎನಗೆ ತೋರದಿರಾ ಗುಹೇಶ್ವರ.
ಏಕೋತ್ತರ ಶತಸ್ಥಲ ಜಕ್ಕಣ, ವಚನ ಸಂ 203
ಹವಣಲ್ಲದ ಶಾಖೆಯ ಕಪಿ ಹಿಡಿಯಲೊಲ್ಲದು. ಗಮನವಿಲ್ಲದೆ ಪಿಕಶಿಶು ನುಡಿಯದು. ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕಟ -ಇಂತೀ ತ್ರಿವಿಧ ಭೇದವ ನೋಡಿರೆ, ಭಕ್ತರಪ್ಪರೆ. ಹೂಮಿಡಿಯ ಹಱಿದಡೆ ಹಣ್ಣಪ್ಪುದೆ? ಹಸಿವು ತೃಷೆ ವಿಷಯವುಳ್ಳನ್ನಕ್ಕರ ಅದ್ವೈತವುಂಟೆ ಜಗದೊಳಗೆ? ತನ್ನ ಮಱೆದು ಲಿಂಗವ ಮಱೆವುದು; ತನ್ನ ಮಱಿಯದೆ ಲಿಂಗವ ಮಱೆವ ಯೋಗವಿನ್ನೆಂತಹದೋ? ಸುಡು ಸುಡು! ಅವಂದಿರು ಗುರುದ್ರೋಹಿಗಳು, ಆಚಾರ ಭ್ರಷ್ಟರು. ಈ ಉಭಯ ತನುಗುಣ ನಾಸ್ತಿಯಾಗದನ್ನಕ್ಕ, ಸತ್ಕ್ರೀಯಿಂದ ಮಾಡುವುದು ಲಿಂಗದಾಸೋಹವ; ಭಯ ಭಕ್ತಿಯಿಂದ ಮಾಡುವುದು ಜ೦ಗಮದಾಸೋಹವ. ತನು ಕರಗಿ, ಮನ ಬೆರಸಿ ನಿಮಗೆ ಮಾಡದ ವ್ರತಗೇಡಿಗಳ ಎನಗೆ ತೋಱದಿರಾ ಗೊಹೇಶ್ವರಾ.

ವಚನ ಆಕರಗಳ ಬಗೆಗೆ

  • ★ ಏಕೋತ್ತರಶತಸ್ಥಲ, ಭಂಡಾರಿ ಜಕ್ಕಣಂಗಳು ಸೇರಿಸಿದ,ಸಂ. ಕಲಬುರ್ಗಿ ಎಂ. ಎಂ., ರಾಜೂರ ವೀರಣ್ಣ, ಲಿಂಗಾಯತ ಅಧ್ಯಯನ ಸಂಸ್ಥೆ, ಲಿಂಗಾಯತ ಅಧ್ಯಯನ ಸಂಸ್ಥೆ, ಯೆಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ, 2014 (ಮರು ಮುದ್ರಣ: ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ, ಸಂ. 14, ವಚನ ಸಾಹಿತ್ಯ ಭಾಗ 6, ವಿಜಯಪುರ)
  • ★ ಲಿಂಗಲೀಲಾವಿಲಾಸಚಾರಿತ್ರ ಕಲ್ಲುಮಠದ ಪ್ರಭುದೇವರು ವಿರಚಿಸಿದ, ಸಂ. ಭೂಸನೂರಮಠ ಸಂ. ಶಿ., ಶ್ರೀ ನಿ. ಪ್ರ. ಸ್ವ. ಮೃತ್ಯುಂಜಯ ಮಹಾಸ್ವಾಮಿಗಳು, ಮುರುಘಾಮಠ, ಧಾರವಾಡ, 1956
  • ★ ಪ್ರಭುದೇವರ ಶೂನ್ಯಸಂಪಾದನೆ ಶಿವಗಣಪ್ರಸಾದಿ ಮಹದೇವಯ್ಯನ, ಬಸವರಾಜು ಎಲ್., ಸಪ್ನ ಬುಕ್ ಹೌಸ್, ಬೆಂಗಳೂರು, 2017
  • ★ ಎಲ್ಲ ಪುರಾತರನ ವಚನಗಳು ಭಾಗ. 1 ಕೋಲಶಾಂತಯನ್ನ ವಚನಗಳಿಂದ ಆರಂಭವಾಗುವ ಸಂಪುಟ, ರಾಜೂರ ವೀರಣ್ಣ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2006
  • ★ ಎಲ್ಲ ಪುರಾತರನ ವಚನಗಳು ಭಾಗ. 2 ಗೊಗ್ಗವೆಯ್ಯರ ವಚನಗಳಿಂದ ಆರಂಭವಾಗುವ ಸಂಪುಟ, ಶಿರೂರ ಬಿ. ವ್ಹಿ., ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2006
  • ★ ಎಲ್ಲ ಪುರಾತರನ ವಚನಗಳು ಭಾಗ. 3 ಬಸವಣ್ಣನವರ ವಚನಗಳಿಂದ ಆರಂಭವಾಗುವ ಸಂಪುಟ, ಮಧು ವೆಂಕಾರೆಡ್ಡಿ, ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು, 2006
  • ★ ಗಣಭಾಷಿತ ರತ್ನಮಾಲೆಗುಬ್ಬಿ ಮಲ್ಲಣ್ಣ ಕವಿ ವಿರಚಿತ, ಸಂ. ವಿರಕ್ತಮಠ ಪ್ರಭುಸ್ವಾಮಿಗಳು, ಶ್ರೀ ಮು. ನಿ. ಪ್ರ. ಮುತ್ಯುಂಜಯ ಸ್ಮಾಮಿಗಳು, ಮುರುಘಾ ಮಠ, ಧಾರವಾಡ, 1948
  • ★ ಹಲಗೆಯಾರ್ಯನ ಶೂನ್ಯಸಂಪಾದನೆ, ಸಂ. ವಿದ್ಯಾಶಂಕರ ಎಸ್., ಸಿದ್ಧಲಿಂಗಯ್ಯ ಜಿ. ಎಸ್., ಪ್ರಿಯದರ್ಶಿನ ಪ್ರಕಾಶನ, ಬೆಂಗಳೂರು, 1998

ಆಕರಗಳ ಕಾಲಮಾನ:15ನೇ ಶತಮಾನದ ವಚನ ಆಕರಗಳು ಇಂದು ತಿಳಿದಂತೆ ತೀರ ಹಿಂದಿನ ಪ್ರತಿ ಎಂದರೆ 1412ರ ಜಕ್ಕಣನ ಏಕೋತ್ತರಶತಸ್ಥಲ (ಕಲಬುರ್ಗಿ, ಸಮಗ್ರ ಸಾಹಿತ್ಯ, ಪು 425, 2020??). ಲಿಂಗಲೀಲಾವಿಲಾಸಚಾರಿತ್ರ ಹಾಗೂ ಮಹದೇವಯ್ಯನವರ ಶೂನ್ಯಸಂಪಾದನೆ ಗಳೆರಡನ್ನೂ ಸುಮಾರು 15ನೆಯ ಶತಮಾನದ ನಡುವಿಗೆ ಇರಿಸಲಾಗುತ್ತದೆ (1430). ಸಕಲ ಪುರಾತನರ ವಚನಗಳುನ ಮೂರುಕಟ್ಟುಗಳ ಕಾಲಮಾನವನ್ನು 15ನೆಯ ಶತಮಾನದ ಕೊನೆಗೆ ಎನ್ನುತ್ತಾರೆ ವೀರಣ್ಣ ರಾಜೂರ (ಪು.xxx, ಎಲ್ಲ ಪುರಾತನರ ವಚನಗಳು, 2006; 1420 ರಿಂದ 1495ರ ನಡುವೆ ಎನ್ನುತ್ತಾರೆ ಅವರು ). ನಂತರದ ಶತಮಾನದ ಆಕರಗಳಲ್ಲಿ ಗುಬ್ಬಿ ಮಲ್ಲಣ್ಣನ ಗಣಭಾಷಿತರತ್ನಮಾಲೆ ಮತ್ತು ಹಲಗೆಯಾರ್ಯನ ಶೂನ್ಯಸಂಪಾದನೆ ಬರುತ್ತವೆ (ಇವುಗಳ ಬಗೆಗೆ ವೀರಶೈವಾಮೃತ ಪುರಾಣದ ಕಾಲಮಾನವೇ 1530 ಆಧಾರ. ಹೀಗಾಗಿ ಗುಬ್ಬಿ ಮಲ್ಲಣ್ಣ ರಚಯತನ ತಾತನಾದ್ದರಿಂದ ಅವನನ್ನು 15ನೆಯ ಶತಮಾನದಲ್ಲಿ ಇರಿಸ ಬಹುದು. ಆದರೆ ಹಲಗೆಯಾರ್ಯನದು 15ರ ಕೊನೆ ಅಥವಾ 16ನೇ ಶತಮಾನದ ಆರಂಭ ಎನ್ನಲಾಗಿದೆ )

ಇಲ್ಲಿ ಕೆಲವು ಜನಪ್ರಿಯ ಕೃತಿಗಳನ್ನು ತೆಗೆದುಕೊಳ್ಳಲಾಗಿದೆ. ಇತರ ವಚನ ಹೊತ್ತಿಗೆಗಳನ್ನು ಸೇರಿಸಿಕೊಳ್ಳ ಬೇಕಿದೆ.

Sample Image